ಆನಂದ್ ಸಿಂಗ್ ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದರಿಂದ ರೈತರು ತೊಂದರೆ ಅನುಭವಿಸುತ್ತಿದ್ದಾರೆ. ಇವರು ಗಣಿ ಲೂಟಿ ಹೊಡೆಯದಿದ್ದರೆ ಗಣಿಗಾರಿಕೆ ಬಂದ್ ಆಗುತ್ತಿರಲಿಲ್ಲ. ಯುವಕರಿಗೆ ಉದ್ಯೋಗವೇ ಇಲ್ಲ. ಅವರ ವಿರುದ್ಧ ಜನರಿಗೆ ಬಹಳ ಅಸಮಾಧಾನ ಇದೆ. ಗೆದ್ದ ನಂತರ ಸಕ್ಕರೆ ಕಾರ್ಖಾನೆ ಮೊದಲು ಆರಂಭಿಸುತ್ತೇನೆ. ಕಾರ್ಖಾನೆಯವರು ಮುಂದೆ ಬರದಿದ್ದರೆ ನಾನೇ ಖರೀದಿಸಿ, ಆರಂಭಿಸುವೆ.