ಹೊಸಪೇಟೆ: ‘ಬಿ.ಎಸ್. ಯಡಿಯೂರಪ್ಪನವರು ಅನರ್ಹ ಶಾಸಕರ ಕುರಿತು ಮಾತನಾಡಿರುವ ವಿಡಿಯೊ ಯಾರು ಮಾಡಿದ್ದಾರೆ ಎಂದು ಹೇಳುವುದಕ್ಕೆ ನಾನು ತನಿಖಾ ಏಜೆಂಟನಲ್ಲ. ನಾನು ಅಂಜನ ಹಾಕಿಲ್ಲ. ಅಂಜನ ಹಾಕೋ ಸಾಮರ್ಥ್ಯ ಇರೋದು, ಮೂಢನಂಬಿಕೆ ನಂಬಿರೋ ಕಾಂಗ್ರೆಸ್ನವರಿಗೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿದರು.