ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಡಿಯೊ ಯಾರು ಮಾಡಿದರೆಂದು ಹೇಳಲು ನಾನೇನು ಅಂಜನ ಹಾಕುವುದಿಲ್ಲ: ಸಿ.ಟಿ ರವಿ

Last Updated 5 ನವೆಂಬರ್ 2019, 17:12 IST
ಅಕ್ಷರ ಗಾತ್ರ

ಹೊಸಪೇಟೆ: ‘ಬಿ.ಎಸ್‌. ಯಡಿಯೂರಪ್ಪನವರು ಅನರ್ಹ ಶಾಸಕರ ಕುರಿತು ಮಾತನಾಡಿರುವ ವಿಡಿಯೊ ಯಾರು ಮಾಡಿದ್ದಾರೆ ಎಂದು ಹೇಳುವುದಕ್ಕೆ ನಾನು ತನಿಖಾ ಏಜೆಂಟನಲ್ಲ. ನಾನು ಅಂಜನ ಹಾಕಿಲ್ಲ. ಅಂಜನ ಹಾಕೋ ಸಾಮರ್ಥ್ಯ ಇರೋದು, ಮೂಢನಂಬಿಕೆ ನಂಬಿರೋ ಕಾಂಗ್ರೆಸ್‌ನವರಿಗೆ’ ಎಂದು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಪ್ರತಿಕ್ರಿಯಿಸಿದರು.

ಮಂಗಳವಾರ ಸಂಜೆ ತಾಲ್ಲೂಕಿನ ಹಂಪಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಅಂಜನ ಹಾಕೋದಕ್ಕೆ ಬರುವ ಕಾಂಗ್ರೆಸ್‌ನವರು ಕೆಲವರ ಹೆಸರು ಹೇಳುತ್ತಿದ್ದಾರೆ. ಅವರನ್ನೇ ಈ ವಿಚಾರ ಕೇಳಿದರೆ ಒಳ್ಳೆಯದು’ ಎಂದರು.

‘ನಾನು ಸರ್ಕಾರದಲ್ಲಿ ಒಬ್ಬ ಸಚಿವ. ವಿಡಿಯೊ ಯಾವ ಕಾರಣಕ್ಕೆ ಲೀಕ್‌ ಆಯ್ತು ಎನ್ನುವುದು ಗೊತ್ತಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಆ ಕುರಿತು ಹೆಚ್ಚಿಗೆ ಮಾತನಾಡಲಾರೆ’ ಎಂದು ಹೇಳಿದರು.

‘ಯಡಿಯೂರಪ್ಪನವರನ್ನು ನಮ್ಮ ಪಕ್ಷದಲ್ಲಿ ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ. ನಮ್ಮಲ್ಲಿ ಯಾವುದೇ ವ್ಯತ್ಯಾಸವಿಲ್ಲ. ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯನವರ ಆಯ್ಕೆಯನ್ನು ಹಲವರು ಪ್ರಶ್ನಿಸಿದ್ದಾರೆ. ಅದನ್ನು ಹಲವು ಮುಖಂಡರು ಬಹಿರಂಗವಾಗಿಯೇ ವಿರೋಧಿಸಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT