ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಸೇತುವೆ ಇದಾಗಿದ್ದು,ಗ್ರಾಮದಿಂದ ಹೆದ್ದಾರಿಗೆ ಮೂರು ಕಿ.ಮೀ. ಅಂತರವಿದೆ. ನಗರ ಸೇರಿದಂತೆ ತೋರಣಗಲ್ಲು, ಬಳ್ಳಾರಿ, ಹುಬ್ಬಳ್ಳಿ, ಚಿತ್ರದುರ್ಗಕ್ಕೆ ಗ್ರಾಮಸ್ಥರು ಇದೇ ಮಾರ್ಗದ ಮೂಲಕ ಓಡಾಡುತ್ತಾರೆ. ಒಂದುವೇಳೆ ಈ ಭಾಗದಲ್ಲಿ ಸಂಪರ್ಕ ಕಡಿತಗೊಂಡರೆ ಗ್ರಾಮಸ್ಥರು ಸುತ್ತು ಬಳಸಿಕೊಂಡು ನಗರಕ್ಕೆ ಬರಬೇಕಾಗುತ್ತದೆ. ಇದರಿಂದ ಸಾಕಷ್ಟು ಸಮಯ ವ್ಯರ್ಥವಾಗುವುದಲ್ಲದೇ ಆರ್ಥಿಕ ಹೊರೆಯೂ ಬೀಳುತ್ತದೆ.