ಪ್ರತಿಯೊಂದು ಭಾಷೆಗೆ ತನ್ನದೇ ಆದ ಸೌಂದರ್ಯವಿರುತ್ತದೆ. ಕನ್ನಡ ಭಾಷೆಯೂ ತ್ರಿಪದಿ, ವಚನ, ಸಾಂಗತ್ಯ, ರಗಳೆ, ಪದ್ಯ, ಗದ್ಯ ಸಾಹಿತ್ಯದಿಂದ ಅತ್ಯಂತ ಶ್ರೀಮಂತವಾಗಿದೆ. ಕೇರಳದವರಿಗೆ ಇದರ ಬಗ್ಗೆ ಗೊತ್ತಿಲ್ಲ. ಇಲ್ಲಿನ ಸಾಹಿತ್ಯ ಕೃತಿಗಳನ್ನು ಮಲಯಾಳಂ ಭಾಷೆಗೆ ಅನುವಾದಿಸುತ್ತಿದ್ದೇನೆ. ಭಾಷಾಂತರ ಮಾಡುವ ಸಮಯದಲ್ಲಿ ಸಣ್ಣ ಸಣ್ಣ ವ್ಯತ್ಯಾಸಗಳನ್ನು ಗಮನಿಸಬೇಕು. ಮೂಲಕೃತಿಗೆ ಧಕ್ಕೆ ಬರದ ಹಾಗೆ ವಿಷಯಗಳನ್ನು ನಿಖರವಾಗಿ, ಸ್ಪಷ್ಟವಾಗಿ ಪ್ರಸ್ತುತಪಡಿಸುವುದು ಮುಖ್ಯವಾಗುತ್ತದೆ ಎಂದು ಹೇಳಿದರು.