ಪ್ರಿಯಾಂಕಾ, ಕೊನೆಯ ಬಾರಿಗೆ ಪತಿಯ ಮೊಬೈಲ್ಗೆ ಕರೆ ಮಾಡಿದ ಸಂಖ್ಯೆಯ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರು ಅಂತಿಮವಾಗಿ ಅವರನ್ನು ಜಬಲ್ಪುರದಲ್ಲಿ ಪತ್ತೆ ಮಾಡಿದ್ದಾರೆ. ‘ನನ್ನನ್ನು ಯಾರೂ ಅಪಹರಿಸಿಲ್ಲ. ಪರಿಚಿತರೊಂದಿಗೆ ದೇವರ ದರ್ಶನಕ್ಕೆ ಹೋಗಿದ್ದೆ ಎಂದು ಪ್ರಿಯಾಂಕಾ ತಿಳಿಸಿದ್ದಾರೆ. ಚಂದನ್ ಅವರನ್ನು ಕರೆಸಿ, ಮಾಹಿತಿ ಕೊಡಲಾಗಿದೆ. ಗಂಡ–ಹೆಂಡತಿ ಮಧ್ಯೆ ಹೊಂದಾಣಿಕೆ ಕೊರತೆಯಿಂದ ಹೀಗಾಗಿದೆ. ಪ್ರಿಯಾಂಕಾ ಹೇಳಿದಂತೆ ಇದು ಅಪಹರಣದ ಕೃತ್ಯವಲ್ಲ’ ಎಂದು ರಘುಕುಮಾರ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.