‘ವಿಶೇಷ ಘಟಕದಿಂದ ಎರವಲು ಕಾರ್ಡಿನ ಮೂಲಕ ಒಬ್ಬ ವಿದ್ಯಾರ್ಥಿಗೆ ಎಂಟು ದಿನಗಳವರೆಗೆ ಒಂದು ಪುಸ್ತಕವನ್ನು ಪಡೆದು ಓದುವ ಅನುಕೂಲವನ್ನು ಕಲ್ಪಿಸಲಾಗಿದೆ. ಪುಸ್ತಕಗಳ ನಿರಂತರ ಅಧ್ಯಯನದಿಂದ ವಿದ್ಯಾರ್ಥಿಗಳು ಹೆಚ್ಚಿನ ಜ್ಞಾನ ಸಂಪಾದಿಸಿಕೊಳ್ಳಬೇಕು. ಇಂದಿನ ಆಧುನಿಕ ಸ್ಪರ್ಧಾತ್ಮಕ ಜಗತ್ತಿನಲ್ಲಿ ಮೊಬೈಲ್ಗಳು ನಮ್ಮ ಹೆಚ್ಚಿನ ಸಮಯವನ್ನು ಹಾಳು ಮಾಡುತ್ತಿವೆ. ಅದರಿಂದ ವಿದ್ಯಾರ್ಥಿಗಳು ದೂರ ಉಳಿದು, ಓದಲು ಹೆಚ್ಚಿನ ಸಮಯ ಮೀಸಲಿಡಬೇಕು’ ಎಂದು ಕಿವಿಮಾತು ಹೇಳಿದರು.