ತಳವಾರಘಟ್ಟ, ಹಂಪಿ ಸುತ್ತಮುತ್ತಲಿನ ಬಾಳೆ ತೋಟಗಳಿಗೆ ನೀರು ನುಗ್ಗಿದ್ದರಿಂದ ರೈತರು ತೆಪ್ಪದಲ್ಲಿ ಓಡಾಡುವ ಅನಿವಾರ್ಯತೆ ಸೃಷ್ಟಿಯಾಗಿತ್ತು. ಎದುರು ಬಸವಣ್ಣ ಮಂಟಪದ ಎದುರು ಎರಡರಿಂದ ಮೂರು ಅಡಿಗಳಷ್ಟು ನೀರು ನಿಂತಿತ್ತು. ಸೋಮವಾರ ಜಲಾಶಯದಿಂದ ನದಿಗೆ 1,15,954 ಕ್ಯುಸೆಕ್ಗೆ ನೀರು ತಗ್ಗಿಸಿದ್ದರಿಂದ ನದಿ ಪಾತ್ರದಲ್ಲಿ ನೀರಿನ ಹರಿವು ಕಡಿಮೆಯಾಗಿದೆ. ತಳವಾರಘಟ್ಟ ರಸ್ತೆ, ಎದುರು ಬಸವಣ್ಣ ಮಂಟಪ ಎದುರು ಜಮಾಯಿಸಿದ್ದ ನೀರು ಖಾಲಿಯಾಗಿದೆ. ವಾಹನ ಸಂಚಾರ ಎಂದಿನಂತೆ ಸುಗಮಗೊಂಡಿದೆ. ಬಾಳೆ ತೋಟಗಳಿಂದ ನೀರು ಹರಿದು ಹೋಗಿದ್ದು, ರೈತರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.