ಚಂದ್ರದ್ರೋಣ ಪರ್ವತ ಶ್ರೇಣಿ, ಚುರ್ಚೆಗುಡ್ಡ ಮೀಸಲು ಅರಣ್ಯದಲ್ಲಿ ಬೆಂಕಿ ಬಿದ್ದು ನೂರಾರು ಎಕರೆಯಲ್ಲಿನ ಕಾಡು ನಾಶವಾಗಿದೆ. ಬೆಂಕಿ ಕೆನ್ನಾಲಿಗೆಗೆ ವನ್ಯಜೀವಿಗಳು ದಿಕ್ಕೆಟ್ಟಿವೆ. ಬಾನಾಡಿಗಳು, ಕಪ್ಪೆ, ಹಾವುಗಳು ಆಹುತಿಯಾಗಿವೆ. ಬೆಂಕಿಯಿಂದ ತಪ್ಪಿಸಿಕೊಳ್ಳಲು ಓಡುತ್ತಿದ್ದ ಕಡವೆ ಮರಿಯೊಂದು ಹೊನ್ನಮ್ಮನ ಹಳ್ಳದ ಬಳಿ ಬಿದ್ದು ಮೃತಪಟ್ಟಿದೆ. ಅತ್ತಿಗುಂಡಿ ಬಳಿಯ ಹೊನ್ನಮ್ನನ ಹಳ್ಳದ ಮೇಲ್ಭಾಗ, ಮಾಣಿಕ್ಯಧಾರಾ ಬೆಟ್ಟ ಸಾಲಿನಲ್ಲಿ ಬೆಂಕಿಗೆ ಸಸ್ಯಗಳು, ವನ್ಯಜೀವಿ ಸಂಕುಲ ನಾಶವಾಗಿದೆ