ಸಿಪಿಐ ಕೆ.ರಾಮರೆಡ್ಡಿ ನೇತೃತ್ವದ ಪೊಲೀಸ್ ತಂಡ ಮೈಲಾರ ಗ್ರಾಮದ ಮೂರು ಕಡೆಗಳಲ್ಲಿ ದಾಳಿ ನಡೆಸಿ ಅಕ್ರಮ ಮದ್ಯ ವಶಪಡಿಸಿಕೊಂಡಿದೆ. ಅಕ್ರಮದಲ್ಲಿ ತೊಡಗಿದ್ದ ಆರೋಪಿಗಳಾದ ಹೊಳಲು ಗ್ರಾಮದ ಸೊಪ್ಪಿನ ಪ್ರಕಾಶ, ಮೈಲಾರದ ತೇಜಪ್ಪನವರ ಮಾರುತಿ, ಜಜ್ಜೂರಿ ಪುಟ್ಟಪ್ಪ, ಮಡಿವಾಳರ ಬಸಪ್ಪರನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ದಾಳಿಯಲ್ಲಿ ಮುಖ್ಯಪೇದೆ ಕೆ.ನಾಗರಾಜ, ಶ್ರೀಶೈಲ ಮತ್ತು ಶಿವಪ್ಪ ಇದ್ದರು. ಈ ಕುರಿತು ಹಿರೇಹಡಗಲಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.