ಗುರುವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಎರಡು ದಿನ ನಡೆಯಲಿರುವ ಸಭೆಯಲ್ಲಿ ನೌಕರರು ಎದುರಿಸುತ್ತಿರುವ ಸವಾಲು, ಸಂಘಟನೆ, ಸದ್ಯದ ಸ್ಥಿತಿಗತಿ ಕುರಿತು ವಿಸ್ತೃತವಾಗಿ ಚರ್ಚಿಸಿ, ತೀರ್ಮಾನಕ್ಕೆ ಬರಲಾಗುವುದು. ಮೊದಲ ದಿನ ಬೆಳಿಗ್ಗೆ 11.30ಕ್ಕೆ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ಎಸ್. ವರಲಕ್ಷ್ಮಿ ಚಾಲನೆ ಕೊಡುವರು’ ಎಂದು ಮಾಹಿತಿ ನೀಡಿದರು.