ಇಲ್ಲಿನ ವಡಕರಾಯ ದೇವಸ್ಥಾನದಿಂದ ಆರಂಭಗೊಂಡ ಪಥ ಸಂಚಲನವು ಬಳ್ಳಾರಿ ವೃತ್ತ, ಸಿದ್ದಲಿಂಗಪ್ಪ ಚೌಕಿ, ಮೀರ್ ಆಲಂ ಟಾಕೀಸ್, ಬಸ್ ನಿಲ್ದಾಣ, ರೋಟರಿ ವೃತ್ತ, ಪಟೇಲ್ ನಗರ, ಡಾ.ಬಿ.ಆರ್. ಅಂಬೇಡ್ಕರ್ ವೃತ್ತ, ಚಪ್ಪರದಹಳ್ಳಿ, ಎಸ್.ಆರ್. ನಗರ, ಮೂರಂಗಡಿ ವೃತ್ತದ ಮೂಲಕ ಹಾದು ಪಟ್ಟಣ ಪೊಲೀಸ್ ಠಾಣೆಯಲ್ಲಿ ಕೊನೆಗೊಂಡಿತು. ಭದ್ರತಾ ಪಡೆಯವರು ಪಥ ಸಂಚಲನ ಕೈಗೊಂಡಾಗ ಜನ ರಸ್ತೆಬದಿ ನಿಂತು ಕುತೂಹಲದಿಂದ ನೋಡಿದರು.