ಇಲ್ಲಿನ ಎಸ್.ಆರ್. ನಗರದ ನಿವಾಸಿ ರಾಜು (32), ಕಾರಿಗನೂರಿನ ಹಂಪಿನಕಟ್ಟೆಯ ರಂಜಿತಾ (24) ಮೃತರು. ‘ರಾಜು ಬೈಕ್ ಓಡಿಸುತ್ತಿದ್ದರೆ, ರಂಜಿತಾ ಹಿಂಬದಿ ಕೂತಿದ್ದರು. ಇಬ್ಬರು ಗಾಳೆಮ್ಮನ ಗುಡಿ ದೇವಸ್ಥಾನದಿಂದ ನಗರಕ್ಕೆ ಬರುತ್ತಿದ್ದರು. ಅನಂತಶಯನಗುಡಿಯ ರೈಸ್ ಮಿಲ್ ಬಳಿಯ ತಿರುವಿನಲ್ಲಿ ಎದುರಿನಿಂದ ವೇಗವಾಗಿ ಬಂದ ಲಾರಿ ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರ ಗಾಯಗೊಂಡು, ರಕ್ತಸ್ರಾವವಾಗಿ ರಾಜು, ರಂಜಿತಾ ಮರಣ ಹೊಂದಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ.