ಹೊಸಪೇಟೆ: ಮಕರ ಸಂಕ್ರಮಣದ ಮುನ್ನ ದಿನವಾದ ಬುಧವಾರ ನಗರದ ಮಾರುಕಟ್ಟೆಯಲ್ಲಿ ಖರೀದಿ ಸಂಭ್ರಮ ಕಂಡು ಬಂತು.
ಹಬ್ಬಕ್ಕೆ ಅಗತ್ಯವಾದ ಎಳ್ಳು, ಬೆಲ್ಲ, ಕಾಯಿ, ಕರ್ಪೂರ, ಬಾಳೆದಿಂಡು, ಕಬ್ಬು ಸೇರಿದಂತೆ ಇತರೆ ವಸ್ತುಗಳನ್ನು ಖರೀದಿಸಲು ವಿವಿಧ ಬಡಾವಣೆಗಳಿಂದ ಜನ ಬಂದದ್ದರಿಂದ ಮಾರುಕಟ್ಟೆಯಲ್ಲಿ ಜನಜಾತ್ರೆ ಕಂಡು ಬಂತು.
ನಗರದ ಎಪಿಎಂಸಿ ಮಾರುಕಟ್ಟೆ, ಸೋಗಿ ಮಾರುಕಟ್ಟೆ ಹಾಗೂ ಮಹಾತ್ಮ ಗಾಂಧಿ ವೃತ್ತದಲ್ಲಿ ಬೆಳಿಗ್ಗೆ ಹಾಗೂ ಸಂಜೆ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಜನ ಬಂದಿದ್ದರು. ಇದರಿಂದಾಗಿ ಈ ಪ್ರದೇಶದಲ್ಲಿ ಕೆಲಕಾಲ ಸಂಚಾರದಲ್ಲಿ ವ್ಯತ್ಯಯ ಉಂಟಾಗಿತ್ತು.
ಇನ್ನು ಬುಧವಾರ ರಾತ್ರಿ ಬಹುತೇಕ ಮನೆಗಳ ಎದುರು ಮಹಿಳೆಯರು ರಂಗೋಲಿ ಬಿಡಿಸಿ, ಹೂವಿನ ಅಲಂಕಾರ ಮಾಡಿ ಹಬ್ಬಕ್ಕೆ ಸಿದ್ಧತೆ ಮಾಡಿಕೊಂಡಿದ್ದರು.