‘ಮಣ್ಣಿನ ಮಕ್ಕಳು ಎಂದು ಕರೆಸಿಕೊಳ್ಳುವವರು ಇಂಧನ, ಲೋಕೋಪಯೋಗಿ ಕೇಳುತ್ತಾರೆ. ಅವರೆಲ್ಲ ತಂಪಾದ ಖಾತೆ ಕೇಳ್ತಾರೆ. ಆದರೆ, ಬಿ.ಸಿ. ಪಾಟೀಲ್ ಅದಕ್ಕೆ ತದ್ವಿರುದ್ಧ. ಕೃಷಿ ಇಲಾಖೆ ಜವಾಬ್ದಾರಿ ಹೊತ್ತುಕೊಂಡ ನಂತರ ಮೊದಲ ಹಂತದಲ್ಲಿ 30 ಜಿಲ್ಲೆಗಳ ಪ್ರವಾಸ ಪೂರ್ಣಗೊಳಿಸಿದ್ದಾರೆ. ಎರಡನೇ ಹಂತದಲ್ಲಿ ಐದಾರೂ ಜಿಲ್ಲೆ ಪ್ರವಾಸ ಮಾಡಿದ್ದಾರೆ. ಅವರಿಗೆ ಕೃಷಿ ಹಾಗೂ ಕೃಷಿಕರ ಮೇಲೆ ವಿಶೇಷ ಪ್ರೀತಿ ಇದೆ’ ಎಂದು ಗುರುವಾರ ಇಲ್ಲಿ ಹಮ್ಮಿಕೊಂಡಿದ್ದ ಸಹಕಾರ ಸಪ್ತಾಹದಲ್ಲಿ ಕೊಂಡಾಡಿದರು.