ಪ್ರೊಬೇಷನರಿ ಅವಧಿ ಘೋಷಣೆ, ಬೋಧಕ ಹುದ್ದೆಗಳ ನೇಮಕಾತಿ, ಪಿಂಚಣಿ ಉಪಧನ ಬಿಡುಗಡೆ, ಕೊಲೊಕ್ವಿಯಂ, ಮುಂಬಡ್ತಿಗೆ ಹಣದ ಬೇಡಿಕೆ, 2011ರಿಂದ 2021ರ ಅವಧಿಯಲ್ಲಿ ವಿಶ್ವವಿದ್ಯಾಲಯಕ್ಕೆ ಆರ್ಥಿಕವಾಗಿ ವಂಚಿಸಿದ ಮತ್ತು ಇತರೆ ಸಾಬೀತಾದ ಪ್ರಕರಣಗಳು, ನೇಮಕಾತಿಗೆ ಅನುಸರಿಸಿದ ಮೀಸಲಾತಿ ನಿಯಮ, ಮಾನದಂಡ, ಅಭ್ಯರ್ಥಿಗಳ ಅರ್ಹತೆ, ಡಾ. ಸಂಪತ್ಕುಮಾರ್ ತೆಗ್ಗಿ, ಶಂಕರಗೌಡ ಗುಂಡಕನಾಳ ಮಾಡಿರುವ ಆರೋಪಗಳ ಕುರಿತು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಏಕವ್ಯಕ್ತಿ ತನಿಖಾ ಸಮಿತಿ ನೇಮಿಸಿ, ಮೂರು ತಿಂಗಳೊಳಗೆ ವರದಿ ಪಡೆಯಲು ಸಭೆ ಅನುಮೋದನೆ ನೀಡಿದೆ ಎಂದು ಕುಲಸಚಿವರು ತಿಳಿಸಿದ್ದಾರೆ.