ಸಿದ್ದನಗೌಡ ಹಾಗೂ ಆರ್. ಬಸವನಗೌಡ ಅವರ ತಂದೆ ಕೆಂಚನಗೌಡ ತೀರಿಕೊಂಡ ನಂತರ ಇಬ್ಬರೂ ಸಹೋದರರ ನಡುವೆ ಆಸ್ತಿ ಹಂಚಿಕೆ ಸಂಬಂಧ ಜಗಳವಾಗಿದೆ. 2016ನೇ ಇಸ್ವಿ ಏಪ್ರಿಲ್ 28ರಂದು ಸಂಜೆ 7.30ರ ಸುಮಾರಿಗೆ ಬಸವನಗೌಡ ತನ್ನ ಮನೆಯ ಅಂಗಳದಲ್ಲಿ ನಿಂತಿದ್ದಾಗ, ಸಿದ್ದನಗೌಡ ಹಿಂದಿನಿಂದ ಬಂದು ಜಾಲಿ ಕಟ್ಟಿಗೆಯಿಂದ ಕಿವಿಯ ಎಡಭಾಗಕ್ಕೆ ಬಲವಾಗಿ ಹೊಡೆದಿದ್ದರು. ಬಳಿಕ ಬಸವನಗೌಡ ಕಲ್ಲುಗಳು ಮೇಲೆ ಬಿದ್ದು, ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದರು. ಈ ಕುರಿತು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕ ಟಿ. ಅಂಬಣ್ಣ ನ್ಯಾಯಾಲಯದಲ್ಲಿ ವಾದ ಮಾಡಿದ್ದಾರೆ.