‘ರಾಕ್ಷಸರು, ಋಷಿ–ಮುನಿಗಳನ್ನು ಬಂಧಿಸಿ, ಅವರಿಗೆ ಇನ್ನಿಲ್ಲದ ಹಿಂಸೆ ಕೊಡುತ್ತಾರೆ. ಇತರೆ ಋಷಿಗಳೆಲ್ಲ ಮುರುಗನ್ ಸ್ವಾಮಿಯನ್ನು ಕಂಡು, ರಾಕ್ಷಸರಿಂದ ಮುಕ್ತಿ ದೊರಕಿಸಿಕೊಡಲು ಪ್ರಾರ್ಥಿಸುತ್ತಾರೆ. ಅವರ ಕೋರಿಕೆ ಮನ್ನಿಸಿ, ರಾಕ್ಷಸರಿಂದ ಮುರುಗನ್ ಸ್ವಾಮಿ ಮುಕ್ತಿ ಕೊಡಿಸುತ್ತಾರೆ. ಅದರ ನೆನಪಿನ ಪ್ರಯುಕ್ತ ಪ್ರತಿವರ್ಷ ಸ್ವಾಮಿಯನ್ನು ನೆನಪಿಸಲಾಗುತ್ತದೆ’ ಎನ್ನುತ್ತಾರೆ ದೇವಸ್ಥಾನದ ಪ್ರಮುಖರಲ್ಲಿ ಒಬ್ಬರಾದ ಲಕ್ಷ್ಮಣ.