ಹೊಸಪೇಟೆ (ವಿಜಯನಗರ): ಜಿಲ್ಲಾಡಳಿತದಿಂದ ಬ್ರಹ್ಮಶ್ರೀ ನಾರಾಯಣ ಗುರು ಅವರ ಜಯಂತಿಯನ್ನು ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಚರಿಸಲಾಯಿತು.
ಹೆಚ್ಚುವರಿ ಜಿಲ್ಲಾಧಿಕಾರಿ ಎನ್.ಮಹೇಶ್ ಬಾಬು ಅವರು ನಾರಾಯಣ ಗುರು ಅವರ ಭಾವಚಿತ್ರಕ್ಕೆ ಪುಷ್ಪಗೌರವ ಸಲ್ಲಿಸಿ, ಎಲ್ಲರಿಗೂ ಶುಭ ಕೋರಿದರು. ತಹಶೀಲ್ದಾರ್ ಬಸವರಾಜು, ಶಿರಸ್ತೆದಾರ್ ವಿರೂಪಾಕ್ಷಪ್ಪ ಶೆಟ್ಟಿ ಇತರರಿದ್ದರು.
ಈಡಿಗರ ಸಮಾಜದ ಜಿಲ್ಲಾ ಅಧ್ಯಕ್ಷ ಚಂದ್ರಣ್ಣ, ತಾಲ್ಲೂಕು ಅಧ್ಯಕ್ಷ ಕೆ. ರಾಘವೇಂದ್ರ, ಈರಣ್ಣ, ಈ. ಕುಮಾರಸ್ವಾಮಿ, ನಾರಾಯಣ ಪೂಜಾರಿ, ಪ್ರಹ್ಲಾದ್, ರಮೇಶ, ಶ್ರೀನಿವಾಸ, ಯರ್ರಿಸ್ವಾಮಿ, ಕೃಷ್ಣಪ್ಪ, ಎ.ಆರ್. ರಂಗನಗೌಡ ಇತರರಿದ್ದರು.
ತಾಲ್ಲೂಕು ಕಚೇರಿಯಲ್ಲಿ ತಹಶೀಲ್ದಾರ್ ವಿಶ್ವಜೀತ್ ಮೆಹ್ತಾ ಅವರು ನಾರಾಯಣ ಗುರು ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಶಿರಸ್ತೆದಾರ್ ಶ್ರೀಧರ್, ಸಿಬ್ಬಂದಿ ಇದ್ದರು.