ಬೆಂಗಳೂರು: ಅಂಬಿಗ, ಬೆಸ್ತ, ಕೋಲಿ, ಕಬ್ಬಲಿಗ, ಮೊಗವೀರ, ತಳವಾರ ಹೀಗೆ 39 ಒಳಪಂಗಡಗಳಲ್ಲಿ ಹಂಚಿಹೋಗಿರುವ ಗಂಗಾಮತ ಸಮುದಾಯ ರಾಜ್ಯದ 18 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರಾಬಲ್ಯ ಹೊಂದಿದ್ದು, ಚುನಾವಣೆಯಲ್ಲಿ ಸ್ಪರ್ಧಿಸಲು ಸಮುದಾಯದವರಿಗೆ ಟಿಕೆಟ್ ನೀಡಬೇಕು ಎಂದು ಅಖಿಲ ಕರ್ನಾಟಕ ಅಂಬಿಗರ ಚೌಡಯ್ಯ ಮಹಾಸಭಾದ ಅಧ್ಯಕ್ಷೆ ಅಂಬಿಕಾ ಜಾಲಗಾರ ಆಗ್ರಹಿಸಿದ್ದಾರೆ.