‘ಅ.28ರಂದು ಸಚಿವ ಎಚ್.ಡಿ.ರೇವಣ್ಣ ಗ್ರಾಮೀಣ ಭಾಗದ ಕೊರ್ಲಗುಂದಿ, ಚಾನಾಳ್, ಮಹಾನಂದಿ ಕೊಟ್ಟಂನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. 29ರಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೆಗೌಡ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಲೋಕಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದ ಸಿ.ಎಂ.ಇಬ್ರಾಹಿಂ ಕೂಡ್ಲಿಗಿಯಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ. ಅಂದು ಸಂಜೆ ದೇವೆಗೌಡರು ಇಲ್ಲಿನ ಕೌಲ್ ಬಜಾರ್ನಲ್ಲಿ ಬಹಿರಂಗ ಸಭೆಯಲ್ಲಿ ಮತ ಯಾಚಿಸಲಿದ್ದಾರೆ. 30ರಂದು ನಗರದಲ್ಲಿ ಪ್ರಚಾರ ನಡೆಸಿ ಶಿವಮೊಗ್ಗಕ್ಕೆ ತೆರಳಲಿದ್ದಾರೆ’ ಎಂದು ಮಾಹಿತಿ ನೀಡಿದರು.