ಹಿನ್ನೆಲೆ: ಇಲ್ಲಿನ ಪೂಜಾರಿ ಮನೆತನದವರು ಕಾಡಿನಲ್ಲಿ ಕಟ್ಟಿಗೆ ಕಡಿದು, ರಾತ್ರಿ ಸುಟ್ಟು ಬರುತ್ತಿದ್ದರು. ಬೆಳಗಿನಲ್ಲಿ ಇದ್ದಿಲುಗಳನ್ನು ಒಯ್ದು ಮಾರುತ್ತಿದ್ದರು. ಒಮ್ಮೆ ಇದ್ದಿಲು ತರಲು ಬೆಳಿಗ್ಗೆ ಕಾಡಿಗೆ ಹೋದಾಗ ಇದ್ದಿಲ ರಾಶಿಗೆ ಬೆಂಕಿ ಹೊತ್ತಿಕೊಂಡು ಉರಿಯುತ್ತಿದ್ದರಿಂದ ತಮ್ಮ ದೇವರು ಇಲ್ಲಿಯೇ ಪ್ರತ್ಯಕ್ಷನಾಗಿದ್ದಾನೆಂಬ ನಂಬಿಕೆಯಿಂದ ಬಗ್ಗಲು ಓಬಳೇಶ್ವರ ಜಾತ್ರೆ ಆಚರಣೆ ಮಾಡಲಾಗುತ್ತದೆ ಎಂದು ಗ್ರಾಮದ ಹಿರಿಯ ಮುಖಂಡ, ಪೂಜಾರಿ ಚಿನ್ನಪಲ್ಲಿ ಓಬಯ್ಯ ಹೇಳಿದರು.