ಕೊನೆಯಲ್ಲಿ ವೇದಿಕೆಯ ಮುಂಭಾಗ ನೆಲದಲ್ಲಿ ಇಡಲಾಗಿದ್ದ ಪುಸ್ತಕದ ಬಂಡಲ್ಗಳನ್ನು ಸಹಾಯಕರಿಂದ ಮೇಲಕ್ಕೆ ಪಡೆದ ಅಧಿಕಾರಿ ಬಿ.ನಾಗರಾಜ, ಎರಡೂ ಕೈಯಿಂದ ಏಕಾಏಕಿ ಎರಚಿದರು. ಅದನ್ನು ನಿರೀಕ್ಷಿಸಿದ ಯುವಜನ ಪುಸ್ತಕಗಳಿಗಾಗಿ ಮುಗಿಬಿದ್ದರು. ನಂತರವೂ ಹಲವು ಬಂಡಲ್ಗಳನ್ನು ಅದೇ ರೀತಿ ಎಸೆಯಲಾಯಿತು. ಸಿಬ್ಬಂದಿ ಕೂಡ ಯುವಜನರೊಂದಿಗೆ ಅನುಚಿತವಾಗಿ ವರ್ತಿಸಿದರು.