ಹೊಸಪೇಟೆ: ಇಲ್ಲಿನ ಊರಮ್ಮ ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣದ ಎಣಿಕೆ ಕೆಲಸ ಶುಕ್ರವಾರ ನಡೆಯಿತು.
2017ರ ಜನವರಿಯಿಂದ ಶುಕ್ರವಾರದ ವರೆಗೆ ಸಂಗ್ರಹವಾದ ಹಣ ಎಣಿಸಿದ್ದು, ಒಟ್ಟು ₨2,77,935 ಸಂಗ್ರಹವಾಗಿದೆ. ಹಿಂದಿನ ವರ್ಷ ₨2,63,580 ಜಮೆ ಆಗಿತ್ತು.
ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಈ ದೇವಸ್ಥಾನ ಬರುತ್ತದೆ. ಉಪ ತಹಶೀಲ್ದಾರ್ ರೇಣುಕಾ ಅವರ ಸಮ್ಮುಖದಲ್ಲಿ ಹಣ ಎಣಿಸಲಾಯಿತು.
ದೇವಸ್ಥಾನ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬಂಡೆ ಶ್ರೀನಿವಾಸ್, ಕಾರ್ಯದರ್ಶಿ ಬಿ. ಶಂಕರಾಚಾರಿ, ಸದಸ್ಯರಾದ ಎಸ್. ಗಾಳೆಪ್ಪ, ಎಸ್. ಮೂರ್ತೆಪ್ಪ, ಕಲ್ಗುಡಿ ಭೀಮಪ್ಪ, ಜಂಬನಹಳ್ಳಿ ಪರಶುರಾಮ, ಗುಜ್ಜಲ್ ಲಕ್ಷ್ಮಪ್ಪ, ಬಂಡಿ ನಾರಾಯಣಪ್ಪ, ಗೌಳೇರ ನಾಗಪ್ಪ ಇದ್ದರು