‘ಹಿರಿಯರ ಸದ್ಗತಿಗಾಗಿ ನೆರವೇರಿಸುವ ವಿಶೇಷ ಪೂಜೆ ಪಿತೃಪಕ್ಷದಲ್ಲಿ ನೆರವೇರಿಸಲಾಗುತ್ತದೆ. ಸಾಕಿ ಸಲುಹಿದ ಹಿರಿಯರು, ಎಲ್ಲ ಪ್ರಾಣಿ, ಪಕ್ಷಿಗಳ ಒಳಿತಿಗಾಗಿ ಈ ಪೂಜೆ ನೆರವೇರಿಸಲಾಗುತ್ತದೆ. ಪ್ರತಿ ವರ್ಷ ವಿವಿಧ ಭಾಗಗಳಿಂದ ನೂರಾರು ಜನ ಹಂಪಿಗೆ ಬಂದು ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ’ ಎಂದು ಪುರೋಹಿತ ಮೋಹನ್ ಚಿಕ್ಕಭಟ್ ಜೋಶಿ ತಿಳಿಸಿದರು.