ಶಿಸ್ತಿಗೆ ಹೆಸರು: ಕ್ರೀಡಾಕೂಟಕ್ಕೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ‘ಎಲ್ಲಾ ಇಲಾಖೆಗಳಿಗೆ ಹೋಲಿಸಿದರೆ ಪೊಲೀಸರು ಮಾತ್ರಶಿಸ್ತು ಉಳಿಸಿಕೊಂಡಿದ್ದಾರೆ.ಸಮವಸ್ತ್ರ ಸೇರಿ ಎಲ್ಲಾ ವಿಚಾರಗಳಲ್ಲಿ ಶಿಸ್ತುಳ್ಳ ಕಾರ್ಯವೈಖರಿ ಅನುಕರಣೀಯ. ಸಾಮಾಜಿಕ ಬದಲಾವಣೆಯ ಸಂದರ್ಭದಲ್ಲಿ ಶಿಸ್ತಿನ ಕೊರತೆಯನ್ನು ನೀಗಿಸಲು ಪೊಲೀಸರ ಕೆಲಸ ಮಹತ್ವವಾದದ್ದು’ ಎಂದರು.