‘ಏಪ್ರಿಲ್ 9ರಿಂದ 11ರವರೆಗೂ ಕಚೇರಿಯಲ್ಲಿಯೇ ‘ವಿಂಡೋ ಸೇವೆ’ ನೀಡಲಾಯಿತು. ಸಾರ್ವಜನಿಕರು ಅಂಚೆ ಕಚೇರಿಗೇ ಬಂದು ಔಷಧಿ, ಪತ್ರ, ಮನಿ ಆರ್ಡರ್ಗಳನ್ನು ಪಡೆದುಕೊಂಡರು. ಆದರೆ ಅದರಿಂದ ಎಲ್ಲರಿಗೂ ಸೇವೆ ನೀಡಲು ಆಗದೇ ಇದ್ದುದರಿಂದ ಮನೆ ಬಾಗಿಲಿಗೇ ಸೇವೆ ನೀಡುವುದು ಅನಿವಾರ್ಯವಾಯಿತು. ಏಪ್ರಿಲ್ 12ರಿಂದ ಸಿಬ್ಬಂದಿ ಕ್ಷೇತ್ರ ಕಾರ್ಯದಲ್ಲಿ ತೊಡಗಿದ್ದಾರೆ’ ಎಂದು ಹೇಳಿದರು. ‘ಸದ್ಯ ಅಂಚೆ ಕಚೇರಿಗಳಲ್ಲಿ ಎರಡು ಪ್ರಮುಖ ಸೇವೆಗಳು ದೊರಕುತ್ತಿವೆ. ಪಿಂಚಣಿ ವಿತರಣೆ ಮತ್ತು ಔಷಧಿ ವಿತರಣೆಯ ಸೇವೆಯಿಂದ ಜನರಿಗೆ ಹೆಚ್ಚು ಅನುಕೂಲವಾಗಿದೆ. ವೈದ್ಯ ಸಿಬ್ಬಂದಿ ಶಂಕಿತ ಸೋಂಕಿತರು ಹಾಗೂ ಸೋಂಕಿತರ ಬಳಿ ಇದ್ದು ಕೊರೊನಾ ವಿರುದ್ಧ ಹೋರಾಡುತ್ತಿದ್ದರೆ, ನಮ್ಮ ಸಿಬ್ಬಂದಿ ಅವರಿಂದ ದೂರದಲ್ಲಿ, ಸಮಾಜದ ನಡುವೆ ಇದ್ದುಕೊಂಡು
ಸೇವೆ ಸಲ್ಲಿಸುತ್ತಿದ್ದಾರೆ’ ಎಂದು ತಿಳಿಸಿದರು.