‘ಸಾಲು ಮಂಟಪ ಜೀರ್ಣೊದ್ಧಾರ ನನೆಗುದಿಗೆ’ ಶೀರ್ಷಿಕೆ ಅಡಿಯಲ್ಲಿ ಅ. 5ರಂದು ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು. ಹಂಪಿ ರಥಬೀದಿಗೆ ಹೊಂದಿಕೊಂಡಿರುವ ಸಾಲು ಮಂಟಪದಲ್ಲಿ ಮಳೆ ನೀರು ನಿಂತಿದ್ದು, ಜೀರ್ಣೊದ್ಧಾರ ಸ್ಥಗಿತಗೊಂಡಿದೆ. ನೀರು ಸಂಗ್ರಹವಾಗಿರುವ ಕಾರಣ ಎಲ್ಲೆಡೆ ದುರ್ಗಂಧ ಹರಡಿತ್ತು. ಇದರಿಂದ ಸೊಳ್ಳೆ ಕಾಟ ಹೆಚ್ಚಾಗಿತ್ತು ಎಂದು ವರದಿಯಲ್ಲಿ ಪ್ರಸ್ತಾಪಿಸಲಾಗಿತ್ತು.