ಶಾಲೆಗೆ ಕುಡಿಯುವ ನೀರಿನ ಟ್ಯಾಂಕರ್ ಕಳುಹಿಸಲಾಗಿದ್ದು, ಕುಡಿಯಲು ಹಾಗೂ ಬಳಕೆಗೆ ನೀರು ಉಪಯೋಗಿಸಬಹುದಾಗಿದೆ. ಆದರ್ಶ ಶಾಲೆಯಲ್ಲಿನ ಕೊಳವೆಬಾವಿ ಹದಗೆಟ್ಟಿದ್ದರಿಂದ ಕುಡಿಯುವ ನೀರು, ಶೌಚಾಲಯಕ್ಕೆ ನೀರಿಲ್ಲದೆ ವಿದ್ಯಾರ್ಥಿಗಳು ತೊಂದರೆ ಅನುಭವಿಸುತ್ತಿದ್ದರು. ಸೋಮವಾರ ಶಾಲೆ ಆರಂಭಗೊಂಡ ಮೊದಲ ದಿನವೇ ಸಮಸ್ಯೆ ಉಂಟಾಗಿತ್ತು. ಈ ಕುರಿತು ಮಂಗಳವಾರ ‘ಆದರ್ಶ ಶಾಲೆ; ನೀರಿಗೆ ಸಮಸ್ಯೆ’ ಶೀರ್ಷಿಕೆ ಅಡಿ ‘ಪ್ರಜಾವಾಣಿ’ ವರದಿ ಪ್ರಕಟಿಸಿತ್ತು.