ಧಾರ್ಮಿಕ ದತ್ತಿ ಇಲಾಖೆಯ ಕ್ರಮಕ್ಕೆ ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ. ಗೋಪುರದ ತುತ್ತ ತುದಿಯಲ್ಲಿ ಸದಾ ಉರಿಯುವ ವಿದ್ಯುದ್ದೀಪ ನೋಡಿ ಸುತ್ತಲಿನ ಅನೇಕ ಗ್ರಾಮಸ್ಥರು ಸಂಜೆಯಾದೊಡನೆ ಕೈಮುಗಿಯುವ ಪರಂಪರೆ ಇದೆ. ಆದರೆ, ತಿಂಗಳ ಹಿಂದೆ ವಿದ್ಯುದ್ದೀಪ ಕೆಟ್ಟು ಹೋಗಿ ಗೋಪುರದ ಮೇಲೆ ಕತ್ತಲು ಆವರಿಸಿಕೊಂಡಿತ್ತು.