ಬಳಿಕ ಮಾತನಾಡಿದಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಕೇಂದ್ರ ಸಮಿತಿ ಸದಸ್ಯ ಕರಿಯಪ್ಪ ಗುಡಿಮನಿ, ’ತುಂಗಭದ್ರಾ ಜಲಾಶಯ ಹಾಗೂ ಅದರ ಕಾಲುವೆಗಳ ನಿರ್ಮಾಣದ ಸಂದರ್ಭದಲ್ಲಿ ಆಂಧ್ರ ಪ್ರದೇಶ, ತಮಿಳುನಾಡು ಸೇರಿದಂತೆ ರಾಜ್ಯದ ನಾನಾ ಭಾಗಗಳಿಂದ ಸುಮಾರು 200 ಕುಟುಂಬಗಳು ವಲಸೆ ಬಂದಿದ್ದವು. ಅಂದಿನಿಂದ ಇಂದಿನ ವರೆಗೆ ಆ ಕುಟುಂಬಗಳು ರೈಲ್ವೆ ಇಲಾಖೆಗೆ ಸೇರಿದ ಮುದ್ಲಾಪುರದಲ್ಲಿ ಬದುಕು ನಡೆಸುತ್ತಿವೆ. ಈಗ ಆ ಜಾಗವನ್ನು ರೈಲ್ವೆ ಇಲಾಖೆಯು ಅಭಿವೃದ್ಧಿ ಪಡಿಸಲು ಮುಂದಾಗಿದೆ. ಮನೆಗಳನ್ನು ತೆರವುಗೊಳಿಸುವುದು ಅನಿವಾರ್ಯವಾಗಿದ್ದು, ಆ ಎಲ್ಲ ಕುಟುಂಬದವರಿಗೆ ನಗರದ ಬೇರೆ ಭಾಗದಲ್ಲಿ ಸೂರು ಕಲ್ಪಿಸಬೇಕು’ ಎಂದು ಒತ್ತಾಯಿಸಿದರು.