ಎರಡನೇ ಶನಿವಾರ, ಭಾನುವಾರ ಹಾಗೂ ಬಕ್ರೀದ್ ನಿಮಿತ್ತ ಸೋಮವಾರ ರಜೆ ಇತ್ತು. ಸಾಲು ಸಾಲು ರಜೆ ಬಂದದ್ದರಿಂದ ಜನ ಅಣೆಕಟ್ಟೆ ಹಾಗೂ ಹಂಪಿ ಬಂದಿದ್ದರು. ಎಲ್ಲೆಡೆಯಿಂದ ಜನ ಬಂದದ್ದರಿಂದ ದಟ್ಟಣೆ ಕಂಡು ಬಂತು. ಅಣೆಕಟ್ಟೆಯ ಮುಂಭಾಗ, ಪಾರ್ಕಿಂಗ್ ಜಾಗ ವಾಹನಗಳು ಭರ್ತಿಯಾಗಿತ್ತು. ಜಲಾಶಯದ ಮುಖ್ಯ ಪ್ರವೇಶದ್ವಾರದಿಂದ ತಿರುಮಲ ಉದ್ಯಾನದ ವರೆಗೆ ಜನಜಂಗುಳಿ ಕಂಡು ಬಂತು.