ಸಿರುಗುಪ್ಪ: ಭಾನುವಾರ ಮಧ್ಯ ರಾತ್ರಿ ಸುರಿದ ಮಳೆಯಿಂದ ತಾಲ್ಲೂಕಿನ ರಾರಾವಿ ಮತ್ತು ಬಂಡ್ರಾಳ್ ಗ್ರಾಮದ ನಡುವೆ ಇರುವ ಆದಾವಾನಿ ರಸ್ತೆಯ ಲಕ್ಕಮ್ಮ ಹಳ್ಳ ತುಂಬಿದ್ದು ಅದನ್ನು ದಾಟಲು ಹೋದ ಎರಡು ಲಾರಿಗಳು ಉರುಳಿ ಬಿದ್ದು ಹಾಗೂ ಒಂದು ಖಾಸಗಿ ಬಸ್ ಹಳ್ಳದಲ್ಲಿ ಸಿಲುಕಿತ್ತು.
ನೆಲ ಮಟ್ಟದಲ್ಲಿರುವ ಹಳ್ಳದಸೇತುವೆ ಮೇಲೆ ಮಳೆಯ ನೀರು ಹರಿಯುತ್ತಿದ್ದು ಸೋಮವಾರ ಬೆಳಿಗ್ಗೆ ಸೇತುವೆಯನ್ನು ದಾಟಲು ಹೋಗಿ ಎರಡೂ ಸರಕು ತುಂಬಿದ ಲಾರಿಗಳು ನಿಯಂತ್ರಣ ತಪ್ಪಿ ನೀರಿನ ಲ್ಲಿ ಉರುಳಿ ಬಿದ್ದವು.
ಖಾಸಗಿ ಬಸ್ ಸೇತುವೆ ಕೆಳಗೆ ಇಳಿದು ನಿಂತಿದೆ.ಬಸ್ನಲ್ಲಿದ್ದಪ್ರಯಾಣಿಕರನ್ನು ಗ್ರಾಮಸ್ಥರು ರಕ್ಷಿಸಿದ್ದಾರೆ. ಯಾವುದೇ ಜೀವ ಹಾನಿ ಯಾಗಿಲ್ಲ.