ಜಿಂದಾಲ್ನ ಸಾಮಾನ್ಯ ನಿರ್ವಹಣಾ ವಿಭಾಗದಲ್ಲಿರುವವರಿಗೇ ಸೋಂಕು ತಗುಲುತ್ತಿರುವುದರಿಂದ ಅಲ್ಲಿನ ಶೇ 95 ಮಂದಿಗೆ ಐದು ದಿನ ರಜೆ ನೀಡಲಾಗಿದೆ. ಶೇ 5 ರಷ್ಟು ಮಂದಿಗೆ ಮಾತ್ರ ಕೆಲಸಕ್ಕೆ ಬರುವಂತೆ ಜಿಂದಾಲ್ ಸೂಚಿಸಿದೆ. ಜಿಲ್ಲಾಡಳಿತದ ಸೂಚನೆ ಮೇರೆಗೆ ಈ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ಎಸ್. ಎಸ್.ನಕುಲ್ ತಿಳಿಸಿದ್ದಾರೆ.