ರಾಜ್ಯ ಸರ್ಕಾರ ಪ್ರತಿ ಎಕರೆ ಜಮೀನಿಗೆ ₹1.22 ಲಕ್ಷಕ್ಕೆ ಒಟ್ಟು 3,667 ಎಕರೆ ಜಮೀನು ಜಿಂದಾಲ್ಗೆ ಕೊಡಲು ಮುಂದಾಗಿರುವುದು ಸರಿಯಲ್ಲ. ಇಷ್ಟು ಕಡಿಮೆ ಬೆಲೆಗೆ 20X30 ಅಡಿ ನಿವೇಶನ ಕೂಡ ಸಿಗುವುದಿಲ್ಲ. ಅಂತಹದ್ದರಲ್ಲಿ ರಾಜ್ಯದ ಸಮ್ಮಿಶ್ರ ಸರ್ಕಾರ ರೈತರ ಹಿತ ಬಲಿಕೊಟ್ಟು ಕಡಿಮೆ ಬೆಲೆ ಜಮೀನು ಕೊಡಲು ಮುಂದಾಗಿರುವುದು ನೋಡುತ್ತಿದ್ದರೆ ಇದರಲ್ಲಿ ಅಕ್ರಮ ನಡೆದಿರುವಂತೆ ಕಂಡು ಬರುತ್ತಿದೆ ಎಂದು ಮನವಿಯಲ್ಲಿ ಆರೋಪಿಸಿದರು.