ಕಾವ್ಯ, ಕತೆ, ಕಾದಂಬರಿ, ವಿಮರ್ಶೆಗೆ ಸಂಬಂಧಿಸಿದಂತೆ ಒಂದು ದಶಕದಿಂದ ಅವರು ಮಾಡುತ್ತಿರುವ ಕೆಲಸವನ್ನು ಪರಿಗಣಿಸಿ ತುಮಕೂರಿನ ಸ್ನೇಹ ಸಂಗಮ ಸಾಹಿತ್ಯ ಬಳಗವು ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಿತು. ಪ್ರಶಸ್ತಿ ಪತ್ರ ಹಾಗೂ ಫಲಕ ನೀಡಿ ಅವರನ್ನು ಸನ್ಮಾನಿಸಿತು. ‘ಸೋನೆ’ ಎಂಬ ಕಾವ್ಯನಾಮದಿಂದ ರವಿಕುಮಾರ ಸಾಹಿತ್ಯ ಕೃಷಿ ಮಾಡುತ್ತಿದ್ದಾರೆ.