ಆದರೆ, ರೈತರು ಹೇಳುವುದೇ ಬೇರೆ. ‘ಕುಡಿಯುವುದಕ್ಕೆ ಮೂರರಿಂದ ನಾಲ್ಕು ಟಿ.ಎಂ.ಸಿ. ಅಡಿ ನೀರು ಮೀಸಲಿಟ್ಟರೆ ಸಾಕು. ಮಿಕ್ಕುಳಿದದ್ದೆಲ್ಲ ಕೃಷಿಗೆ ಹರಿಸಬೇಕು. ಹಿಂದಿನ ವರ್ಷವೂ ಎರಡನೇ ಬೆಳೆಗೆ ಸಮರ್ಪಕವಾಗಿ ನೀರು ಹರಿಸಲಿಲ್ಲ. ಈ ಸಲ ಅಪಾರ ಪ್ರಮಾಣದಲ್ಲಿ ನೀರಿನ ಸಂಗ್ರಹವಿದೆ. ಹಾಗಾಗಿ ಹಿಂದು, ಮುಂದು ನೋಡದೆ ಕೃಷಿಗೆ ನೀರು ಹರಿಸಬೇಕು’ ಎಂದು ರೈತ ಬಸವರಾಜ ಆಗ್ರಹಿಸಿದರು.