ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೂಂಡಾಗಳನ್ನು ಕಳಿಸಿದ್ದ ರೆಡ್ಡಿ: ಸಿದ್ದರಾಮಯ್ಯ

‘ನನಗೆ ಬೈದರೆ ಕುರುಬರನ್ನೆಲ್ಲ ಬೈದಂತೆ ಅಲ್ಲ’
Last Updated 23 ಅಕ್ಟೋಬರ್ 2018, 11:25 IST
ಅಕ್ಷರ ಗಾತ್ರ

ಸಂಡೂರು (ಬಳ್ಳಾರಿ ಜಿಲ್ಲೆ):‘ವಿರೋಧ ಪಕ್ಷದ ನಾಯಕನಾಗಿದ್ದಾಗ ನಾನು ಸಂಡೂರಿಗೆ ಬಂದಿದ್ದಾಗ ಜಿ.ಜನಾರ್ದನ ರೆಡ್ಡಿ ಗುಂಪು ಗೂಂಡಾಗಳನ್ನು ಕಳಿಸಿದ್ದರು. ರೆಡ್ಡಿ ಸಹೋದರರಿಗೆ ಹೆದರಿ ಅಧಿಕಾರಿಗಳು ಮತ್ತು ಪೊಲೀಸರು ನಮ್ಮ ಜೊತೆ ಬಂದಿರಲಿಲ್ಲ’ ಎಂದು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಮಂಗಳವಾರ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ‘ಅಂದು ನಾನು ಸಂಡೂರಿಗೆ ಬಂದಾಗ ಜನ ಜೀವಭಯದಲ್ಲಿದ್ದರು. ಬಳ್ಳಾರಿಯಲ್ಲಿ ಸಭೆ ನಡೆಸಲು ಜಾಗವೇ ದೊರಕಲಿಲ್ಲ ’ ಎಂದರು.

‘ಜನಾರ್ದನರೆಡ್ಡಿ ಮತ್ತು ಬಿ.ಶ್ರೀರಾಮುಲು ಅವರಿಗೆ 371 ಜೆ ಗೊತ್ತಿಲ್ಲ. ಆದರೆ ಅಪರಾಧ ಕಾಯ್ದೆಗಳು ಗೊತ್ತಿದೆ ಎಂದರೆ ತಪ್ಪೇನು’ ಎಂದು ಪ್ರಶ್ನಿಸಿದರು.

‘ನಾನು ಶ್ರೀರಾಮುಲು ಅವರನ್ನು ಬೈದರೆ ಜಾತಿಯನ್ನು ಎತ್ತಿ ಕಟ್ಟುತ್ತಾರೆ. ನಾಯಕ ಸಮುದಾಯಕ್ಕೆ ಬೈದರು ಎನ್ನುತ್ತಾರೆ. ಹಾಗಾದರೆ ಅವರ ನನಗೆ ಬೈದರೆ ಇಡೀ ಕುರುಬರಿಗೆ ಬೈದಂತೆಯೇ’ ಎಂದು ವ್ಯಂಗ್ಯವಾಡಿದ ಅವರು. ‘ಮಿಸ್ಟರ್ ರಾಮುಲು ನಾಯಕ ಜನಾಂಗಕ್ಕೆ ನಿಮ್ಮ ಕೊಡುಗೆ ಏನು’ ಎಂದು ಕೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT