ಬಳ್ಳಾರಿ: ಸಾರಿಗೆ ನೌಕರರ ವೇತನ ತಾರತಮ್ಯ ನಿವಾರಿಸಲಾಗುವುದು; ಹಬ್ಬದ ಸಮಯದಲ್ಲಿ ತೊಂದರೆ ಆಗದಂತೆ ಎರಡು ತಿಂಗಳ ವೇತನ ನೀಡಲಾಗುವುದು ಎಂದು ಸಾರಿಗೆ ಸಚಿವ ಬಿ. ಶ್ರೀರಾಮುಲು ಶನಿವಾರ ಭರವಸೆ ನೀಡಿದರು.
ಸಾರಿಗೆ ಸಂಸ್ಥೆ ನಷ್ಟದಲ್ಲಿದೆ. ಲಾಭವೂ ಇಲ್ಲದೆ, ನಷ್ಟವೂ ಇಲ್ಲದೆ ಸಾರಿಗೆ ಸಂಸ್ಥೆಯನ್ನು ನಡೆಸಬೇಕಿದೆ. ಸದ್ಯ ಬಸ್ಸುಗಳು ಭರ್ತಿಯಾಗುತ್ತಿಲ್ಲ. ಕೇರಳ, ತಮಿಳುನಾಡು ಮತ್ತು ಮಹಾರಾಷ್ಟ್ರಕ್ಕೆ ಬಸ್ ಸಂಪರ್ಕ ಸ್ಥಗಿತಗೊಳಿಸಲಾಗಿದೆ ಎಂದರು.
ಕೇಂದ್ರದಿಂದ 800 ರಾಜ್ಯದಿಂದ 600 ಎಲೆಕ್ಟ್ರಿಕ್ ಬಸ್ ಖರೀದಿ ಮಾಡಲಾಗುವುದು ಎಂದೂ ಶ್ರೀರಾಮುಲು ಸ್ಪಷ್ಟಪಡಿಸಿದರು.