‘ಸಮಾಜಮುಖಿ’ ಬರಹ ಹೊಂದಿದ ಶ್ವೇತ ವರ್ಣದ ಟೋಪಿಗಳನ್ನು ಧರಿಸಿಕೊಂಡು ಜನ ಹೆಜ್ಜೆ ಹಾಕಿದರು. ಇದಕ್ಕೂ ಮುನ್ನ ಸಮಾಜಮುಖಿ ಓದುಗರ ಬಳಗದಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಹಮತ್ ತರೀಕೆರೆ ಅವರು ‘ಸಮಾಜಮುಖಿ’ ಮಾಸಿಕ ಸಂಚಿಕೆ ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿ, ‘ಶರಣರು, ಸೂಫಿ ಸಂತರು, ವಿದ್ವಾಂಸರಿಂದ ನಮ್ಮ ಚಿಂತನಾ ಪರಂಪರೆ ಬಹಳ ಗಟ್ಟಿಯಾಗಿದೆ. ಆದರೆ, ಕರ್ನಾಟಕ ಅದರ ವಿರುದ್ಧ ದಿಕ್ಕಿಗೆ ಹೋಗುತ್ತಿರುವುದು ಕಳವಳದ ಸಂಗತಿ’ ಎಂದು ಹೇಳಿದರು.