ಹೊಸಪೇಟೆ (ವಿಜಯನಗರ): ನಗರದ ಭಾರತೀಯ ಸ್ಟೇಟ್ ಬ್ಯಾಂಕಿನಿಂದ ಗುರುವಾರ ನಗರದಲ್ಲಿ ₹5 ಲಕ್ಷ ಮೊತ್ತದ ಕೋವಿಡ್ ಕಿಟ್ ಅನ್ನು ತಾಲ್ಲೂಕು ಆಡಳಿತಕ್ಕೆ ನೀಡಲಾಯಿತು.
ಬ್ಯಾಂಕಿನ ಬ್ಯಾಂಕಿನ ವಿಭಾಗೀಯ ಪ್ರಧಾನ ವ್ಯವಸ್ಥಾಪಕ ಪ್ರದೀಪ್ ನಾಯರ್ ಅವರು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಅವರಿಗೆಕಿಟ್ ಹಸ್ತಾಂತರಿಸಿದರು.
ಆರೋಗ್ಯ ಇಲಾಖೆ, ಪೊಲೀಸ್ ಇಲಾಖೆ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ನಗರಸಭೆಯಲ್ಲಿ ಕರ್ತವ್ಯ ನಿರ್ವಹಿಸುವ ಕೊರೊನಾ ಮುಂಚೂಣಿ ಸೇನಾನಿಗಳಿಗೆ ಎನ್ -95 ಮಾಸ್ಕ್,ಸ್ಯಾನಿಟೈಸರ್, ಕೈಗವಸು, ಪಲ್ಸ್ಆಕ್ಸಿಮೀಟರ್, ಔಷಧವನ್ನು ಕಿಟ್ ಒಳಗೊಂಡಿದೆ.
ಬ್ಯಾಂಕಿನಮುಖ್ಯ ಶಾಖೆಯ ವ್ಯವಸ್ಥಾಪಕ ಅಭಯ್ ಕುಮಾರ್ ಸಿಂಗ್, ವಲಯ ವ್ಯವಸ್ಥಾಪಕ ರವಿ ರಾಮಮೂರ್ತಿ, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ಭಾಸ್ಕರ್, ನಗರಸಭೆ ಪೌರಾಯುಕ್ತ ಮನ್ಸೂರ್ ಅಲಿ ಇದ್ದರು.