ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಲೆಗೆ ಬಂದು ಕಳೆ ಹೆಚ್ಚಿಸಿದರು

Last Updated 29 ಮೇ 2019, 12:30 IST
ಅಕ್ಷರ ಗಾತ್ರ

ಹೊಸಪೇಟೆ: ಬೇಸಿಗೆ ರಜೆ ಬಳಿಕ ನಗರ ಸೇರಿದಂತೆ ತಾಲ್ಲೂಕಿನಾದ್ಯಂತ ಸರ್ಕಾರಿ ಮತ್ತು ಖಾಸಗಿ ಶಾಲೆಗಳು ಬುಧವಾರ ಆರಂಭಗೊಂಡವು.

ಮಂಗಳವಾರವೇ ಶಾಲಾ ಆವರಣ, ಕೊಠಡಿಗಳನ್ನು ಸ್ವಚ್ಛಗೊಳಿಸಿ ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಕೆಲವು ಶಾಲೆಗಳನ್ನು ತೋರಣಗಳಿಂದ ಅಲಂಕರಿಸಲಾಗಿತ್ತು. ಬುಧವಾರ ಬೆಳಿಗ್ಗೆ ಮಕ್ಕಳು ಬರುತ್ತಿದ್ದಂತೆಶಾಲೆಗಳ ಕಳೆ ಹೆಚ್ಚಿತ್ತು. ಇಷ್ಟು ದಿನ ಮೌನವಾಗಿದ್ದ ಶಾಲೆಯ ಪರಿಸರದಲ್ಲಿ ಚಿಣ್ಣರ ಕಲರವ ಕೇಳಿ ಬಂತು.

ಕೆಲವು ಮಕ್ಕಳು ನಗು ಮುಖದಿಂದ ಶಾಲೆಯ ಕಡೆಗೆ ಹೆಜ್ಜೆ ಹಾಕಿದರೆ, ಕೆಲವು ಮಕ್ಕಳು ಭಾರದ ಮನಸ್ಸಿನೊಂದಿಗೆ ಶಾಲೆಗೆ ಹೋದರು. ಇನ್ನು ಕೆಲ ಮಕ್ಕಳು ಅಳುತ್ತ, ಅಮ್ಮನಿಗೆ ಟಾಟಾ ಹೇಳುತ್ತ ಪೆಚ್ಚು ಮುಖ ಮಾಡಿಕೊಂಡು ತರಗತಿಯೊಳಗೆ ಹೋದರು.

ಶಾಲೆಯ ಮೊದಲ ದಿನವಾಗಿದ್ದರಿಂದ ಬಹುತೇಕ ಶಾಲೆಗಳಲ್ಲಿ ಹಾಜರಾತಿ ಬೆರಳೆಣಿಕೆಯಷ್ಟಿತ್ತು. ಮೊದಲ ದಿನ ಪರಸ್ಪರ ಪರಿಚಯ, ಅನೌಪಚಾರಿಕ ಮಾತುಗಳಿಗಷ್ಟೇ ತರಗತಿಗಳು ಸೀಮಿತವಾದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT