ನಾಗರಿಕ ಹಕ್ಕು: ಜಾಗೃತಿ ಅಗತ್ಯ: ಉಡೇದ ಬಸವರಾಜ್

ಬಳ್ಳಾರಿ: ‘ನಾಗರಿಕ ಹಕ್ಕುಗಳ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಅತ್ಯಗತ್ಯ’ ಎಂದು ವೀರಶೈವ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಉಡೇದ ಬಸವರಾಜ್ ಹೇಳಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಭಾನುವಾರ ನಾಗರಿಕ ಹಕ್ಕುಗಳ ರಕ್ಷಣಾ ಸಮಿತಿ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಾಗರಿಕ ಹಕ್ಕುಗಳ ದಮನ ಮಾಡಲು ಯಾರಿಗೂ ಅಧಿಕಾರವಿಲ್ಲ’ ಎಂದು ಸ್ಪಷ್ಟಪಡಿಸಿದರು.
‘ ಸಾರ್ವಜನಿಕರ ನೆಮ್ಮದಿಗೆ ಭಂಗ ತರುವ ಅಪರಾಧ ಕೃತ್ಯಗಳನ್ನು ಎಸಗಿದವರನ್ನು ಜನ ಪೊಲೀಸರಿಗೆ ಒಪ್ಪಿಸಬಹುದು. ಪೊಲೀಸರ ಆರೋಪಿಯನ್ನು ಬಂಧಿಸಿದ ೨೪ ಗಂಟೆಯೊಳಗೆ ನ್ಯಾಯಾಲಯದಲ್ಲಿ ಹಾಜರುಪಡಿಸಬೇಕು. ತಪ್ಪು ಮಾಡದವರನ್ನು ದಸ್ತಗಿರಿ ಮಾಡುವ ಹಕ್ಕು ಪೊಲೀಸರಿಗಿಲ್ಲ’ ಎಂದು ಹೇಳಿದರು.
‘ನಾಗರಿಕ ಹಕ್ಕುಗಳು ಮತ್ತು ಜವಾಬ್ದಾರಿಗಳಿಗೆ ಚ್ಯುತಿ ಬರಬಾರದು. ಸಂವಿಧಾನದದಲ್ಲಿ ಮತ್ತೊಬ್ಬರ ಮೇಲೆ ದಬ್ಬಾಳಿಕೆ ಮಾಡದೆ. ಯಾರನ್ನೂ ಕೀಳಾಗಿ ಕಾಣದೆ ಸಮಾನ ಜೀವನ ನಡೆಸಬೇಕು’ ಎಂದು ಹೇಳಿದರು.
ಸಂಸದ ನಾಸಿರ್ ಹುಸೇನ್ ಖಾನ್, ರಾಜ್ಯ ಸರ್ಕಾರದ ನಿವೃತ್ತ ಕಾರ್ಯದರ್ಶಿ ಅದೋನಿ ಸೈಯದ್ ಸಲೀಮ್ ಮಾತನಾಡಿದರು.
ಬಿಷಪ್ ಹೆನ್ರಿ ಡಿಸೋಜಾ, ಸೈಯದ್ ದಾದಾಪೀರ್, ವಕೀಲರಾದ ಬದ್ರಿನಾಥ್, ಅಪ್ಪಾರಾವ್, ಹೈಕೋರ್ಟ್ ವಕೀಲರಾದ ಬಿ.ಟಿ.ವೆಂಕಟೇಶ್. ಎಸ್.ಮೊಹಮ್ಮದ್ ನಿಯಾಜ್, ಬೆಂಗಳೂರಿನ ಮೊಹಮ್ಮದ್ ಫಜಲ್, ಖಾಜಿ ಗುಲಾಮ್ ಮೊಹಮಿದ್, ಜಿಲ್ಲಾ ವಕ್ಫ್ ಮಂಡಳಿ ಅಧ್ಯಕ್ಷ ರಿಜ್ವಾನ್ ಉಮರ್, ಜಾಮಿಯತ್ ಇ ಉಲ್ಮಾ ಇ ಹಿಂದ್ ಹಫೀಜ್ ಮುರ್ತಾಜಾ ಖಾನ್, ಮೊಹಮ್ಮದ್ ರಫೋಕ್ ಖಾಸ್ಮಿ, ಮೊಹಮ್ಮದ್ ಇದ್ರೀಸ್ ಉಮ್ರೀ , ಮಿನ್ಹಾಜುದ್ದೀನ್, ರಜಾಕ್, ಎಂ.ಇಬ್ರಾಹಿಂ ವೇದಿಕೆಯಲ್ಲಿದ್ದರು.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.