ಹರಪನಹಳ್ಳಿ ಪಟ್ಟಣದ ವಿವಿಧ ಅಂಗಡಿಗಳಲ್ಲಿ ಸಾಮಾನು ಖರೀದಿಸಿದಾಗ ಬಿಲ್ ಕೊಡದಿರುವ ಬಗ್ಗೆ ದೂರುಗಳು ಬಂದಿದ್ದವು. ಅವುಗಳ ಆಧಾರದ ಮೇಲೆ ತಪಾಸಣೆ ಕೈಗೊಂಡು, ರಸೀದಿ ಕೊಡದ 12 ಅಂಗಡಿಗಳ ಮಾಲೀಕರಿಗೆ ತಲಾ ₹20 ಸಾವಿರ ದಂಡ ವಿಧಿಸಲಾಗಿದೆ. ಯಾವುದೇ ವ್ಯಕ್ತಿ ಕನಿಷ್ಠ ₹200 ಸಾಮಾನು ಖರೀದಿಸಿದರೆ, ಕಡ್ಡಾಯವಾಗಿ ಜಿಎಸ್ಟಿ ಬಿಲ್ ಕೊಡುವ ನಿಯಮವನ್ನು ಪ್ರತಿಯೊಬ್ಬರು ಪಾಲಿಸಬೇಕು ಎಂದು ಉಪ ಆಯುಕ್ತ ಸಿದ್ದರಾಜು ತಿಳಿಸಿದರು. ಸಹಾಯಕ ಆಯುಕ್ತ ನಟರಾಜ್, ತೆರಿಗೆ ಅಧಿಕಾರಿಗಳಾದ ರಾಜಕುಮಾರ, ಗಾಯತ್ರಿ ಹಾಗೂ ನಾಲ್ಕು ಜನ ಪರಿವೀಕ್ಷಕರು, ಸಿಬ್ಬಂದಿ ಹಾಜರಿದ್ದರು.