ಇದು ನಗರಸಭೆ ಒಂದನೇ ವಾರ್ಡ್ ವ್ಯಾಪ್ತಿಗೆ ಬರುವ ಬಡಾವಣೆಗಳ ದುಃಸ್ಥಿತಿ. ಚಿತ್ತವಾಡ್ಗಿ ಮುಖ್ಯರಸ್ತೆ ಹೊರತುಪಡಿಸಿದರೆ ರಹಮತ್ ನಗರ, ಹೊಸೂರು ರಸ್ತೆ, ರಾಮಾಲಿಸ್ವಾಮಿ ಮಸೀದಿ ರಸ್ತೆ ಹಲವು ದಶಕಗಳಿಂದ ಟಾರ್ ಕಂಡಿಲ್ಲ. ಕಚ್ಚಾ ರಸ್ತೆಯಲ್ಲೇ ಜನ ಓಡಾಡುತ್ತಾರೆ. ಚರಂಡಿಗಳ ಸಂಪರ್ಕ ಸರಿಯಾಗಿ ಇರದೇ ಇರುವುದು, ಸಕಾಲಕ್ಕೆ ತ್ಯಾಜ್ಯ ವಿಲೇವಾರಿ ಮಾಡದ ಕಾರಣ ಎಲ್ಲೆಡೆ ದುರ್ಗಂಧ ಹರಡಿರುತ್ತದೆ.