ಶಿಗ್ಗಾವಿ (ಹಾವೇರಿ ಜಿಲ್ಲೆ): ವಿಧಾನ ಪರಿಷತ್ ಸದಸ್ಯ ಸೋಮಣ್ಣ ಬೇವಿನಮರದ ಹೇಳಿರುವಂತೆ, ಕ್ಷೇತ್ರ ಬಿಟ್ಟು ಕೊಡುವ ಕುರಿತು ತಮ್ಮಿಬ್ಬರ ನಡುವೆ ಮಾತುಕತೆಯೇ ನಡೆದಿಲ್ಲ. ಹೀಗಾಗಿ, ಕ್ಷೇತ್ರ ಬಿಟ್ಟು ಕೊಡುವ ಪ್ರಶ್ನೆಯೇ ಇಲ್ಲ ಎಂದು ಶಾಸಕ ಬಸವರಾಜ ಬೊಮ್ಮಾಯಿ ಶುಕ್ರವಾರ ಇಲ್ಲಿ ಸ್ಪಷ್ಟಪಡಿಸಿದರು.ಬೇವಿನಮರದ ಹಾಗೂ ಮಾಜಿ ಶಾಸಕ ರಾಜಶೇಖರ ಸಿಂಧೂರ ಅವರ ಬಂಡಾಯವು ತಮ್ಮ ವಿರುದ್ಧವಲ್ಲ; ಬದಲಿಗೆ ಇಡೀ ಕ್ಷೇತ್ರದ ಮತದಾರರ ವಿರುದ್ಧದ ಬಂಡಾಯ ಎಂದ ಅವರು, ಪ್ರಬುದ್ಧರಾಗಿರುವ ಕ್ಷೇತ್ರದ ಜನರಿಗೆ ಪ್ರಸ್ತುತ ರಾಜಕೀಯ ವಿದ್ಯಮಾನದ ಅರಿವಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.