ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘ಹಿರಿಯರಾದ ದೊರೆಸ್ವಾಮಿಯವರು ಸ್ವಾತಂತ್ರ್ಯ ಹೋರಾಟಗಾರರು ಎನ್ನುತ್ತಾರೆ. ಆದರೆ, ದೇಶಭಕ್ತಿಯೂ ಇರಬೇಕಲ್ಲ. ಅವರು ಸಿಎಎ, ಎನ್ಆರ್ಸಿ ವಿರೋಧಿಸುವುದು ತಪ್ಪು. ದೇಶದ ಏಕತೆಯನ್ನು ಕಾಪಾಡಬೇಕು. ಅವರಿಗೆ ಕಾಂಗ್ರೆಸ್ ಬೆಂಬಲ ಕೊಡುತ್ತಿದೆ. ಬಿಜೆಪಿಯವರನ್ನು ಪ್ರಚೋದಿಸಿ ಪ್ರತಿಭಟಿಸುವುದೂ ತಪ್ಪು’ ಎಂದು ಪ್ರತಿಪಾದಿಸಿದರು.