ಅಖಂಡ ಭಜನೆ:ಉತ್ಸವದ ಪ್ರಯುಕ್ತ ಗುಡಿಯಲ್ಲಿ ಏ.14ರ ಬೆಳಿಗ್ಗೆ 6 ಗಂಟೆಯಿಂದ 15ರ ಬೆಳಿಗ್ಗೆ 6 ಗಂಟೆಯವರೆಗೆ ಅಖಂಡ ಭಜನೆ ನಡೆಯಲಿದೆ. ಸಿಂಧನೂರಿನ ಕರ್ನಾಟಕ ಜಾಣಪದ ತತ್ವಪದ ಸಾಂಸ್ಕೃತಿಕ ಕಲಾತಂಡ, ನಗರದ ನಿಜಗುಣ ಶಿವಯೋಗಿ ತತ್ವಪದ ಜಾನಪದ ಸಾಂಸ್ಕೃತಿಕ ಕಲಾ ತಂಡ, ಕೂಡ್ಲಿಗಿಯ ಸಾಮರಸ್ಯ ಜಾನಪದ ಸಂಗೀತ ಮೇಳ, ಅಲ್ಲೀಪುರದ ಆಂಜನೇಯ ಸ್ವಾಮಿ ಭಜನಾ ಮಂಡಳಿ, ನೀಲಕಂಠೇಶ್ವರ ಸ್ವಾಮಿ ಭಜನಾ ಮಂಡಳಿಯ ಕಲಾವಿದರು ಪಾಲ್ಗೊಳ್ಳಲಿದ್ದಾರೆ.15ರಂದು ಮಧ್ಯಾಹ್ನ ಅನ್ನ ಸಂತರ್ಪಣೆ ನಡೆಯಲಿದೆ.