ಬಳ್ಳಾರಿ: ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಗೆಲ್ಲುವುದು ಬಿ.ಶ್ರೀ ರಾಮುಲು ಅವರ ಹಗಲುಗನಸು ಎಂದು ಜೆಡಿ ಎಸ್ ಚುನಾವಣೆ ಉಸ್ತುವಾರಿ ಡಿ.ಎಸ್.ಶರವಣ ಪ್ರತಿಪಾದಿಸಿದರು.
ಶ್ರೀರಾಮುಲು ಮತ್ತು ಅಭ್ಯರ್ಥಿ ಜೆ.ಶಾಂತಾ ಜೊತೆಗೆ ಬಿಜೆಪಿ ನಾಯಕರು ಇಲ್ಲ ಎಂದು ಜನಾರ್ದನರೆಡ್ಡಿಯವರೇ ಹೇಳಿದ್ದಾರೆ. ಇದು ಫಲಿತಾಂಶ ಕ್ಕೆ ಕೈಗನ್ನಡಿಯಾಗಲಿದೆ ಎಂದು ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.