‘ಕಡ್ಡಾಯ ವರ್ಗಾವಣೆಗೆ ಅರ್ಹರಿರುವ ಶಿಕ್ಷಕರನ್ನು ಪಟ್ಟಿ ಮಾಡಿದ ಬಳಿಕ, ರೈತರು, ವ್ಯಾಪರಸ್ಥರು, ಖಾಸಗಿ ಸಂಸ್ಥೆಗಳ ಉದ್ಯೋಗಿಗಳನ್ನು ಮದುವೆಯಾದವರಿಗೆ ಮಾತ್ರ ವರ್ಗಾವಣೆ ನೀತಿ ಅನ್ವಯಿಸುವುದು ಅಮಾನವೀಯ. ಸರ್ಕಾರಿ ನೌಕರ ದಂಪತಿ, ವಿಧವೆಯವರು, ಅವಿವಾಹಿತ ಮಹಿಳೆಯರು, ಗಂಭೀರ ಕಾಯಿಲೆಯುಳ್ಳವರು ಮತ್ತು ಸರ್ಕಾರಿ ಸಂಘ ಸಂಸ್ಥೆಗಳ ಮುಖಂಡರಿಗೆ ಮಾತ್ರ ವರ್ಗಾವಣೆಯಿಂದ ವಿನಾಯ್ತಿ ನೀಡಿರುವುದು ಸರಿಯಲ್ಲ’ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ನಿಂಗಪ್ಪ, ಶಿಕ್ಷಕರಾದ ಬಳ್ಳಾರಿ ನಗರದ ಶ್ರೀನಿವಾಸರೆಡ್ಡಿ, ಹೊಸಪೇಟೆಯ ಈರಮ್ಮ ಹಿರೇಮಠ್, ಲಕ್ಷ್ಮಿ, ಮಲ್ಲೇಶ್ ಆಕ್ರೋಶ ವ್ಯಕ್ತಪಡಿಸಿದರು.