‘ತರುಣ್ ಕುಮಾರ್ ಎಂಬುವರು ಹೈದರಾಬಾದ್ನಿಂದ ಹಂಪಿ ನೋಡಲು ಬಂದಿದ್ದರು. ನೆಲಸ್ತರ ಶಿವಾ ದೇವಾಲಯ ಸ್ಮಾರಕ ನೋಡಲು ಕಾರು ನಿಲ್ಲಿಸಿ ಹೋಗಿದ್ದರು. ಸ್ಮಾರಕ ನೋಡಿ ವಾಪಸ್ ಬಂದಾಗ ಕಾರಿನ ಗಾಜು ಒಡೆದು, ಅದರೊಳಗಿದ್ದ ಲ್ಯಾಪ್ಟಾಪ್, ಐಫೋನ್ ತೆಗೆದುಕೊಂಡು ಹೋಗಿದ್ದಾರೆ. ಈ ಕುರಿತು ಇನ್ನಷ್ಟೇ ಪ್ರಕರಣ ದಾಖಲಾಗಬೇಕಿದೆ’ ಎಂದು ಹಂಪಿ ಪೊಲೀಸ್ ಠಾಣೆಯ ಸಿಪಿಐ ಪಂಪಣ್ಣ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.